Tuesday, May 26, 2009

ನಾಚಿಕೆ

೪ ತಿಂಗಳ ಹಿಂದೆ ನನ್ನ ಸ್ನೇಹಿತ ಸಂಗು(ಸಂಗಮೇಶ್) ಅವನ ಜೊತೆಗೂಡಿ ಅವರ ಸಂಬಂಧಿಕರ ಮನೆಗೆ ಹೋಗಿದ್ವಿ.
ನನ್ನನ್ನು ಹಾಲ್'ನಲ್ಲಿದ್ದ ಸೋಫಾದ ಮೇಲೆ ಕುಳ್ಳಿರಿಸಿ ಒಳಗಡೆ ಹೋದ.
ಅವರು ಬಾಗಲಕೋಟೆ ಕಡೆಯವರು. ತುಂಬಾ ಆತ್ಮೀಯವಾಗಿ ಮಾತನಾಡಿಸಿದರು.
ಸ್ವಲ್ಪ ಸಮಯದ ಬಳಿಕ ಒಳಗಡೆಯಿಂದ ಅವರ ಮನೆಯವರು ದೊಡ್ಡ ಗ್ಲಾಸಿನಲ್ಲಿ ಏನೋ ಹಿಡಿದು ತಂದು ನನಗೆ ಕೊಡುವುದಕ್ಕೆ ಮುಂದಾದರು.
ನಾನು ಮೊದೆಲೇ ನಾಚಿಕೆ ಸ್ವಭಾವದವನು.
ಬೇಡ ಬೇಡ ಎಂದು ನಾಚಿಕೆಯಿಂದಲೇ ಸ್ವಲ್ಪ ದೂರ ಸರಿಯುತ್ತ ಕೈಯನ್ನು ಅಡ್ಡ ಹಿಡಿದೆ.
ಅವರು ಸ್ವಲ್ಪ ಆಲೋಚಿಸುತ್ತ ನಿಂತು, ನೀವು ಗ್ಲಾಸಿನಲ್ಲಿ ಏನಿದೆ ಎಂದುಕೊಂಡಿರಿ ಅಂದ್ರು...
ನಾನು ಗ್ಲಾಸಿನಲ್ಲಿ ಏನಿದೆ ಎಂದು ಇಣಿಕಿ ನೋಡಿದೆ.
ಅದ್ರಲ್ಲಿ ಇದ್ದದ್ದು ನೀರು.
ನಾಚಿಕೆಯಿಂದ ತಲೆ ತಗ್ಗಿಸಿದೆ.
ಮನೆಗೆ ಬಂದವರಿಗೆ ಮೊದಲು ಕುಡಿಯಲು ನೀರು ಕೊಡುವುದು ಸಂಪ್ರದಾಯ.
ಏನ್ ಮಾಡೋದು, ನನಗೆ ಗೊತ್ತಿರ್ಲಿಲ್ಲ.
ಅಂತು ಅವತ್ತು, ನಾನು ಅವರ ಮನೆಯಲ್ಲಿ ಊಟ ಮಾಡುವವರೆಗೂ ಬಿಡಲಿಲ್ಲ.

ಇನ್ನೊಂದು ನನ್ನ ಚಿಕ್ಕ ಉಪದೇಶ:
ಮೊನ್ನೆ ನನ್ನ ಇನ್ನೊಬ್ಬ ಸ್ನೇಹಿತ ರಘು ಹಾಗು ಅವರ ತಮ್ಮ ಮಹೇಶ ಅವರ ಮನೆಗೆ ಊಟಕ್ಕೆ ಬಲವಂತವಾಗಿ ಕರೆದರು.
ನಾನು ಆಯ್ತು ಅಂದೇ.
ಹಾಗೆ ಅವರಿಗೆ ಒಂದು ಆದೇಶವನ್ನಿತ್ತೆ.
"ಲೋ, ನಾನು ಸ್ವಲ್ಪ ನಾಚಿಕೆ ಸ್ವಭಾವದವನು.
ನಾನು ನಿಮ್ಮ ಮನೆಯವರು ಊಟ ಬಡಿಸುತ್ತಿರುವಾಗ "ಸಾಕು ಸಾಕು" ಅಂತ ಇರ್ತೀನಿ.
ನೀವು "ಹಾಕಿಸ್ಕೊಳೋ ಹಾಕಿಸ್ಕೊಳೋ" ಅಂತ ಬಲವಂತ ಮಾಡಿ ಊಟ ಬಡಿಸಬೇಕು ಓಕೆನಾ ... ?" ಅಂದೇ.

ನೀವು ಕೂಡ ಅಸ್ಟೆ, ನಾನು ನಿಮ್ಮ ಮನೆಗೆ ಊಟಕ್ಕೆ ಬಂದರೆ "ಹಾಕಿಸ್ಕೊಳೋ, ಹಾಕಿಸ್ಕೊಳೋ" ಅಂತ ಬಲವಂತ ಮಾಡಿ ಬಡಿಸಬೇಕು.. ಓಕೆ ನಾ ? :P ಹ್ಹಾ ಹ್ಹಾ ಹ್ಹಾ.... :D
Share/Save/Bookmark

Wednesday, May 20, 2009

ಆಟೋಗ್ರಾಫ್

ಏಳೆಂಟು ವರ್ಷಗಳ ಹಿಂದಿನ ಘಟನೆ. ಒಂದು ಪ್ರಖ್ಯಾತ ಖಾಸಗಿ ಶಾಲೆಯ ವಾರ್ಷಿಕೋತ್ಸವ ಸಮಾರಂಭವಿತ್ತು. ಸಮಾರಂಭ ವೀಕ್ಷಿಸಲು ಬಹಳ ಜನರನ್ನು ಅವ್ಹಾನಿಸಿದ್ದರು.
ಹಾಗಾಗಿ ನಮಗೂ, ನಮ್ಮ ಅಕ್ಕ ಪಕ್ಕದ ಮನೆಯವರಿಗೂ ಆಮಂತ್ರಣ ಸಿಕ್ಕಿತ್ತು.
ಕಾರ್ಯಕ್ರಮಕ್ಕೆ ತೆಲುಗಿನ ಕಿರುತೆರೆ ನಿರೂಪಕಿ ಉದಯಭಾನು ಅವರು ಮುಖ್ಯ ಅಥಿತಿಯಾಗಿ ಬರುತ್ತಿರುವುದಾಗಿ ಪ್ರಕಟಿಸಿದ್ದರು.
ನಮ್ಮೂರು ಕಡೆ ಕನ್ನಡ ಹಾಗು ತೆಲುಗು ಎರಡು ಭಾಷೆಯ ಕಿರುತೆರೆಯ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ. ಹಾಗಾಗಿ ಉದಯಭಾನು ನಮ್ಮ ಕಡೆ ಚಿರಪರಿಚಿತ.
ನಾನು, ನನ್ನ ತಮ್ಮ, ಪಕ್ಕದ ಮನೆಯ ನನ್ನ ತಮ್ಮನ ಸ್ನೇಹಿತ ಮಲ್ಲಿ (ಮಲ್ಲಿಕಾರ್ಜುನ) ಹಾಗು ಇನ್ನು ಕೆಲವು ಸ್ನೇಹಿತರು ಸೇರಿ ಕಾರ್ಯಕ್ರಮ ವೀಕ್ಷಿಸಲು ಹೊರೆಟೆವು. ಹೆಚ್ಚು ಕಮ್ಮಿ ನಾವು ಹೋಗಿದ್ದು ಉದಯಭಾನು ನೋಡಲು ಅನ್ಕೊಳ್ಳಿ. :P
ಕಾರ್ಯಕ್ರಮ ಶುರು ಆಯ್ತು. ಉದಯಭಾನು ಕೂಡ ಬಂದಿದ್ರು.
ಶಾಲೆಯ ಮಕ್ಕಳ ವಿವಿಧ ಮನೋರಂಜನೆ ಕಾರ್ಯಕ್ರಮಗಳು ನಡೆದವು. ಎಲ್ಲ ಚನ್ನಾಗಿ ನಡೆಯಿತು.
ಎಲ್ಲ ಕಾರ್ಯಕ್ರಮಗಳು ಮುಗಿದ ಬಳಿಕ ಉದಯಭಾನು ವಾಪಸ್ ಹೊರಡಲು ತಮ್ಮ ಕಾರಿನತ್ತ ಹೋಗುತ್ತಿದ್ದರು. ಆಟೋಗ್ರಾಫ್ ಪಡೆಯಲು ಅವಳ ಹಿಂದೆ ಜನರು ಓಡಿದರು. ಅಸ್ಟರಲ್ಲಿ ನಮ್ಮ ಮಲ್ಲಿ, ತಾನು ಕೂಡ ಆಟೋಗ್ರಾಫ್ ತಗೊಂಡು ಬರ್ತೀನಿ ಅಂದ. ಅವನ ಹತ್ರ ಪೆನ್ನು ಮಾತ್ರ ಇತ್ತು. ಪೇಪರ್ ಇರ್ಲಿಲ್ಲ. ನನ್ ಹತ್ರ ಚಿಕ್ಕ ಟೆಲಿಫೋನ್ ಡೈರಿ ಇತ್ತು. ಸರಿ ಅದನ್ನೇ ತೆಗೆದುಕೊಂಡು ಓಡಿದ.
ಸ್ವಲ್ಪ ಸಮಯದ ಬಳಿಕ ಹಿಂತಿರಿಗಿದ. ನಮಗೆಲ್ಲ ಅವಳ ಆಟೋಗ್ರಾಫ್ ತೋರಿಸಿದ. "With Love, Udayabhanu" ಅಂತ ಇತ್ತು.
ಅಸ್ಟು ಜನರಿದ್ದರೂ, ಅವರ ಮಧ್ಯ ತೂರಿ ಆಟೋಗ್ರಾಫ್ ತಗೊಂಡು ಬಂದೆಯಲ್ಲ, ಶಹಬಾಶ್ ಎಂದು ಹೊಗಳಿದೆವು. ಅವನು ಕೂಡ ಹರ್ಷದಿಂದ ಬೀಗಿದ.
ಎಲ್ಲ ಮುಗಿಸಿಕೊಂಡು ಮನೆಗೆ ಹೋದೆವು.
ಮರುದಿನ ಬೆಳಿಗ್ಗೆ ನಾನು ಒಬ್ಬನೇ ಇದ್ದಾಗ ಮಲ್ಲಿ ನಮ್ಮ ಮನೆಗೆ ಬಂದು ಮಾತಾಡಿಸುತ್ತ ನಿಮಗೊಂದು ಹೇಳ್ಬೇಕು ಅಂದ.
ಏನೋ ? ಅಂದೆ.
ಆಗ ಅವನು : "ನಿನ್ನೆ ಆಟೋಗ್ರಾಫ್ ತಗೊಳೋಕೆ ಓಡಿ ಹೋದ್ನಾ ?,
ನಾನು ಹೋಗುವುದರೊಳಗಾಗಿ ಉದಯಭಾನು ಹೋಗಿಬಿಟ್ಟಿದ್ರು.
ಆಟೋಗ್ರಾಫ್ ಇಲ್ಲದೆ ಹಿಂತಿರುಗಿದರೆ ನೀವೆಲ್ಲ ಅಪಹಾಸ್ಯ ಮಾಡ್ತೀರಿ ಅಂತ,
ನಾನೆ "With Love, Udayabhanu" ಅಂತ ಬರೆದುಕೊಂಡು ಬಂದೆ."
Share/Save/Bookmark

Tuesday, May 19, 2009

ಲಕುಲಾ ಭೂಕಂಪದ ನಂತರ



ಕೆಲವು ದಿನಗಳ ಹಿಂದೆ ಲಕುಲಾ ನಗರದಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ "ದೇವರಲ್ಲಿ ಪ್ರಾರ್ಥಿಸುತ್ತೇನೆ" ಲೇಖನದಲ್ಲಿ ಹೇಳಿದ್ದೆ.
ನನ್ನ ಸ್ನೇಹಿತರು ಕೆಲಸಕ್ಕೆ ಮರಳಿದ್ದಾರೆ.
ನನ್ನ ಸ್ನೇಹಿತ ರಫೆಲ್ಲೊ (Raffaello) ಭೂಕಂಪದಿಂದಾದ ಅನಾಹುತಗಳ ಚಿತ್ರಗಳನ್ನು ಕಳಿಸಿದ್ದ.
ಅವನ ಒಪ್ಪಿಗೆಯೊಂದಿಗೆ ಚಿತ್ರಗಳನ್ನು ನಿಮಗಾಗಿ ಪ್ರಕಟಿಸುತ್ತಿದ್ದೇನೆ.

ಚಿತ್ರಗಳನ್ನು ಪಿಕಾಸದಲ್ಲಿ ನೋಡಲು ಇಲ್ಲಿ ಕ್ಲಿಕ್ಕಿಸಿ
Share/Save/Bookmark

Tuesday, May 12, 2009

ಸವಾರಿ



ನನ್ನ ಸ್ನೇಹಿತ ರಮೇಶ್ ಆಫೀಸ್ಗೆ ಬೆಳಿಗ್ಗೆ ರೆಡಿ ಆಗಿ ಇನ್ನೇನು ಬೈಕ್ ಹಾತ್ತಬೇಕು ಅನ್ನುವಸ್ಟರಲ್ಲಿ ಅವನ ಸ್ನೇಹಿತ ಉಲ್ಲಾಸ್ ಅವನನ್ನು ಕೇಳಿದ.
"ಯಾವ ಕಡೆಯಿಂದ ಹೋಗ್ತಾ ಇದಿಯಾ ಮಗ ? "
ರಮೇಶ್: "ಶಿವಾಜಿನಗರ್ ಕಡೆಯಿಂದ ಹೋಗ್ತಾ ಇದೀನಿ.. "
ಉಲ್ಲಾಸ್: "ನಾನು ನಿನ್ ಜೊತೆ ಬರ್ತೀನಿ. ಶಿವಾಜಿನಗರ್'ಗೆ ಹೋಗ್ಬೇಕು."
ರಮೇಶ್: "ಸರಿ, ಹೋಗೋಣ ಬಾ.."

ಹತ್ತಿರದ ಹೋಟೆಲ್ಲಿನಲ್ಲಿ ಟಿಫಿನ್ ಮಾಡಿ ರಮೇಶ್ ಬೈಕ್ ಹತ್ತಿ, ಅವನನ್ನು ಹಿಂದಿನ ಸೀಟಿನಲ್ಲಿ ಕುಳ್ಳಿರಿಸಿಕೊಂಡು ಹೊರಟ.
ದಾರಿಯಲ್ಲಿ ಒಂದು ಕುಣಿ ಬಂದಾಗ ಜೋರಾಗಿ ಬೈಕನ್ನು ಎಗ್ಗರಿಸಿದ.
ಜೋರಾಗಿ ಬೈಕ್ ಹೊಡೆಯುತ್ತಿದ್ದ ರಮೇಶನಿಗೆ, ನಿಧನಾವಾಗಿ ಓಡಿಸೋ ಅಂತ ಉಲ್ಲಾಸ ಕೇಳಿಕೊಂಡ.

ಹೋಗುತ್ತಿರುವಾಗ ದಾರಿಯಲ್ಲಿ ಪೆಟ್ರೋಲ್ ಹಾಕಿಸಲು ಪೆಟ್ರೋಲ್ ಬಂಕ್ ನ ಒಳ ನಡೆದು, ಪೆಟ್ರೋಲ್ ಹಾಕಿಸಿದ.
ಮತ್ತೆ, ಸವಾರಿ ಹೊರಟಿತು...
ಜೋರಾಗಿ ಓಡಿಸಿತ್ತಿದ್ದ...
೬ ಕಿಲೋಮೀಟರು ಚಲಸಿದ ಬಳಿಕ, ಒಂದು ದೊಡ್ಡ ಕುಣಿ ಬಂತು. ಅದನ್ನು ನೋಡದೆ ಮತ್ತೆ ಜೋರಾಗಿ ಎಗ್ಗರಿಸಿದ..
ಆಗ ರಮೇಶ್, ಉಲ್ಲಾಸನ ಉದ್ದೇಶಿಸಿ "ಸಾರೀ ಮಗ, ಕುಣಿ ಕಾಣಲಿಲ್ಲ, ಎಗ್ಗರಿಸಿಬಿಟ್ಟೆ" ಎಂದು ಕ್ಷೆಮೆ ಕೇಳಲು ಹಿಂತಿರಿಗಿದ...
ಹಿಂದೆ ಉಲ್ಲಾಸ ಇಲ್ಲ...
ಆಯ್ಯೋ ದೇವರೇ...
ಎಲ್ಲಿ ಬಿದ್ದನೋ ಉಲ್ಲಾಸ ?.ಅಂತ ಹಿಂತಿರಿಗಿ ನೋಡಿದ. ಅಲ್ಲೆಲ್ಲೂ ಅವನಿಲ್ಲ.
ಎಲ್ಲಿ ಹೋದ ಮಾರಾಯ. ಅಂತ ಅವನ ಮೊಬೈಲ್ಗೆ ಕರೆ ಮಾಡಲು ಮೊಬೈಲ್ ಹೊರ ತೆಗೆದ.
ನೋಡಿದರೆ ೩ missed calls. ಅದು ಉಲ್ಲಸಾನಿಂದ.
ತಿರಿಗಿ ಉಲ್ಲಾಸನ ಮೊಬೈಲ್ ಗೆ ಕರೆ ಮಾಡಿದ....
ರಮೇಶ್: "ಲೋ, ಎಲ್ಲಿದಿಯೋ ?"
ಉಲ್ಲಾಸ್: "ಮಗನೆ, ಪೆಟ್ರೋಲ್ ಬಂಕ್ ಹತ್ರ ಇದೀನಿ. ನೀನು ಪೆಟ್ರೋಲ್ ಹಾಕಿಸುವಾಗ ನಾನು ಕೆಳಗಡೆ ಇಳಿದಿದ್ದೆ.. ನಾನು ಅತ್ತ ಕಡೆ ನೋಡುವಾಗ, ಇತ್ತ ನೀನು ಮಾಯಾ... ದೊಡ್ಡ ನಮಸ್ಕಾರ ನಿನಗೆ... ಇನ್ನೊದು ಬಾರಿ ನಿನ್ನ ಬೈಕ್ನಲ್ಲಿ ಬರಲ್ಲಾ ಗುರು. ಇನ್ನೇನು ಮಾಡೋದು, ಬಡವರ ಬಂಧು BMTC ಹತ್ತಿ ಹೊರಡ್ತಾ ಇದೀನಿ.. ಚನ್ನಾಗಿ ಡ್ರಾಪ್ ಮಾಡದಲ್ಲ, ತುಂಬಾ ಥ್ಯಾಂಕ್ಸ್....ಫೋನ್ ಇಡ್ತೀನಿ ಮಗ, BYE "
Share/Save/Bookmark