Friday, January 29, 2010

ಒಂದು ಭಯಾನಕ ರಾತ್ರಿ

ಕಳೆದ ಡಿಸೆಂಬರ್ ತಿಂಗಳಿನ ೨೫, ೨೬, ೨೭ನೆ ತಾರೀಕು ಕಚೇರಿಗೆ ರಜಾ ಇದ್ದ ಪ್ರಯುಕ್ತ, ನನ್ನ ಗೆಳೆಯ ಇಂದ್ರ ಹಾಗು ಅವನ ಸಹೋದ್ಯೋಗಿಗಳ ಒಂದು ಪ್ರವಾಸಕ್ಕೆ ಪ್ಲಾನ್ ಹಾಕಿಕೊಂಡರು. ಅದರಲ್ಲಿ ೬-ಗಂಡಸರು, ೬-ಹೆಂಗಸರು, ೪-ಚಿಕ್ಕ ಮಕ್ಕಳು ಇದ್ದರು. ಪ್ರವಾಸಕ್ಕೆ ೧೪ ಆಸನಗಳುಳ್ಳ ಟೆಂಪೊ ಟ್ರಾವೆಲ್ಲೆರ್ (ಟಿ.ಟಿ) ಬುಕ್ ಮಾಡಲು ಇಂದ್ರ ನನ್ನ ಸಹಾಯ ಕೇಳಿದ.
ನಾನು ನನಗೆ ಪರಿಚಯವಿದ್ದ ಬಸವನ ಸಹಾಯ ಕೇಳಿದೆ. ನಮ್ಮ ಬಸವ, ಅವನ ಮನೆ ಪಕ್ಕದಲ್ಲೆ ಇದ್ದ ಟ್ರಾವೆಲ್ ಎಜೆನ್ಸಿಯಲ್ಲಿ ಒಂದು ಟಿ.ಟಿ ಯನ್ನು ಬುಕ್ ಮಾಡಿದ. ಆ ಟ್ರಾವೆಲ್ ಎಜೆನ್ಸಿಯವನು ಟಿ.ಟಿ ಹೊಂದಿರುವ ಮಾಲೀಕನ ಮೊಬೈಲ್ಗೆ ಕರೆ ಮಾಡಿ ೨೪ನೆ ತಾರೀಕು ರಾತ್ರಿ ೮ ಘಂಟೆಗೆ ಸರಿಯಾಗಿ ವಿಜಯನಗರದಲ್ಲಿ ಮೊದಲು ಪಿಕ್-ಅಪ್ ಮಾಡುವಂತೆ ಹೇಳಿದೆವು.

ಡಿಸೆಂಬರ್ ೨೪, ರಾತ್ರಿ ೭:೩೦ಕ್ಕೆ ವಿಜಯನಗರದ ಬಸ್ ಸ್ಟಾಪ್ ಹತ್ತಿರ ಪ್ರಸಾದ್ ಬಂದು ಕಾಯುತ್ತಾ ನಿಂತ. ರಾತ್ರಿ ೮ ಘಂಟೆಗೆ ಬರಬೇಕಾಗಿದ್ದ ಟಿ.ಟಿ, ೯ ಘಂಟೆಯಾದರು ಬರಲೇ ಇಲ್ಲ. ಇಂದ್ರನಿಗೆ ಈ ವಿಷಯ ತಿಳಿಸಿದ. ಇಂದ್ರ ಟಿ.ಟಿ ಮಾಲೀಕನಿಗೆ ಫೊನ್ ಮಾಡಿದ.
ಇಂದ್ರ: "ಸರ್, ಎಂಟು ಘಂಟೆಗೆ ಬರಲು ಹೇಳಿದ್ದ ಟಿ.ಟಿ. ಒಂಬತ್ತು ಘಂಟೆಯಾದರು ಇನ್ನೂ ಬಂದಿಲ್ಲ. ಇನ್ನೂ ಎಸ್ಟೊತ್ತಿಗೆ ಬರುತ್ತೆ ?"
ಟಿ.ಟಿ ಮಾಲೀಕ: "ಕಾರಣಾಂತರಗಳಿಂದ ಟಿ.ಟಿ ಕಳಿಸಲು ಆಗುವುದಿಲ್ಲ. ನೀವು ಬೇರೆ ಟಿ.ಟಿ ಯನ್ನು ನೊಡಿಕೊಳ್ಳಿ ಸರ್. ಕ್ಷಮಿಸಿ"
ಇಂದ್ರ: "ಮುಂಚೇನೆ ಹೇಳಿದ್ದರೆ, ನಾವು ಬೇರೇ ಕಡೆ ನೊಡ್ಕೊಳ್ತಾ ಇದ್ವಿ. ನೀವು ಈಗ ಹೇಳಿದರೆ ಹೇಗೆ ?"
ಟಿ.ಟಿ ಮಾಲೀಕ "ಕ್ಷಮಿಸಿ ಸರ್" ಎಂದು ಹೇಳಿ ಫೊನ್ ಕಟ್ ಮಾಡಿದ.

ನಮ್ಮ ಇಂದ್ರ ಟ್ರಾವೆಲ್ ಎಜೆನ್ಸಿಯವನಿಗೆ ಫೊನ್ ಮಾಡಿದ. ಟ್ರಾವೆಲ್ ಎಜೆನ್ಸಿಯವನು "ಈಗಲೇ ಆ ಟಿ.ಟಿ. ಮಾಲೀಕನಿಗೆ ಫೊನ್ ಮಾಡಿ ಕೇಳುತ್ತೇನೆ ಸರ್" ಎಂದ.
ಕೊನೆಗೆ ಆ ಟ್ರಾವೆಲ್ ಎಜೆನ್ಸಿಯವನು ಫೊನ್ ಮಾಡಿ "ಸರ್, ಆ ಮಾಲೀಕ ಏನೇನೊ ಕಾರಣಗಳನ್ನು ಹೇಳುತ್ತಿದ್ದಾನೆ. ನಾನು ಬೇರೇ ಎಲ್ಲಾ ಕಡೆ ವಿಚಾರಿಸಿದೆ. ಕ್ರಿಸ್ಮಸ್ ಹಬ್ಬ ಹಾಗು ಮೂರು ದಿನಗಳ ರಜೆ ಇರುವುದರಿಂದ ಎಲ್ಲೂ ಟಿ.ಟಿ ಸಿಗುತ್ತಿಲ್ಲ. ಎಲ್ಲಾ ಟಿ.ಟಿ ಗಳು ಬುಕ್ ಆಗಿ ಹೋಗಿವೆ" ಎಂದ.
"ನಾವು ಈಗ ಏನು ಮಾಡಬೇಕು ಹೇಳಿ? ಇದೆ ಕಾರಣಕ್ಕಾಗಿ ನಾವು ನಿಮಗೆ ಒಂದು ವಾರದ ಮುಂಚೆಯೇ ತಿಳಿಸಿದ್ದೇವೆ. ನೀವು ಈಗ ಕೈಕೊಟ್ಟರೆ ನಾವು ಎನು ಮಾಡಬೇಕು. ಮುಂಚೇನೆ ಆಗುವುದಿಲ್ಲ ಎಂದು ಹೇಳಬೇಕಿತ್ತು" ಎಂದು ಇಂದ್ರ ಕೇಳಿದ.
ಅದಕ್ಕೆ ಆ ಟ್ರಾವೆಲ್ ಎಜೆನ್ಸಿಯವನು "ಸರ್. ನೀವು ನನ್ನನ್ನು ನಂಬಿದ ಹಾಗೆ, ನಾನು ಆ ಟಿ.ಟಿ ಮಾಲೀಕನನ್ನು ನಂಬಿದ್ದೆ. ಅವನು ಈಗ ಕೈಕೊಟ್ಟಿದ್ದಾನೆ. ನಾನು ಎನು ಮಾಡಲಿ ಹೇಳಿ ಸರ್?" ಎಂದು ಪ್ರಶ್ನೆ ಹಾಕಿದ ಹಾಗೆ "ನಿಮಗೆ ಬೇಕಾದರೆ ಒಂದು ಟಾಟಾ ಸುಮೊ ಹಾಗು ಒಂದು ಇಂಡಿಕಾ ರೆಡಿ ಮಾಡಿ ಕೊಡುತ್ತೇನೆ ಸರ್" ಎಂದ.
ಇತ್ತಾ ಪ್ರವಾಸಕ್ಕೆ ರೆಡಿಯಾಗಿ ಮನೆಯ ಮುಂದೆ ಕಾಯುತ್ತಾ ನಿಂತ ೧೩ ಜನ, ಒಬ್ಬರದ ನಂತರ ಒಬ್ಬರು ಕರೆ ಮಾಡಿ "ಎನಾಯ್ತೊ ? ಇಸ್ಟೊತ್ತಾದರು ಇನ್ನು ಗಾಡಿ ಬಂದಿಲ್ವಲ್ಲೊ" ಎನ್ನುವ ಪ್ರಶ್ನೆಗಳು ಸುರಿಮಳೆ.
ಅದರಲ್ಲೂ ಸ್ನೇಹಾ ಎನ್ನುವ ಹುಡುಗಿ "ಇಂದ್ರ, ಎಲ್ಲಾರ ಹತ್ತಿರ ಟ್ರಿಪ್ ಹೋಗ್ತಾ ಇದೀವಿ ಅಂತಾ ಹೇಳಿ ಸಿಕ್ಕಾಪಟ್ಟೆ ಸ್ಕೊಪ್ ಬೇರೆ ತಗೊಂಡಿದೀವಿ. ಹೇಗಾದರು ಮಾಡಿ ಟ್ರಿಪ್ ಕ್ಯಾನ್ಸಲ್ ಆಗದಂತೆ ನೋಡ್ಕೊಳೋ..." ಎನ್ನುವ ಡೈಲಾಗ್ ಬೇರೆ.
ನಮ್ಮ ಇಂದ್ರನಿಗೆ ತೆಲೆ ಬಿಸಿಯಾಯಿತು.

ವಿಷಯ ನನಗೂ ಗೊತ್ತಾಯಿತು. ನಾನು ಕೂಡ ಟ್ರಾವೆಲ್ ಎಜೆನ್ಸಿಯವನಿಗೆ ಫೊನ್ ಮಾಡಿ ದಬಾಯಿಸಿದೆ. ಆದರೆ ಯಾವುದೇ ಉಪಯೋಗವಾಗಲಿಲ್ಲ. ಈ ಹೊತ್ತಿಗಾಗಲೆ ರಾತ್ರಿ ೧೦:೩೦ ಆಗಿತ್ತು. ಆ ಹೊತ್ತಿನಲ್ಲಿ ಮತ್ತೊಂದು ಟಿ.ಟಿ ಹುಡುಕಲು ಇಂದ್ರ ತನಗೆ ಗೊತ್ತಿದ್ದ ಸ್ನೇಹಿತರಿಗೆ ಫೊನ್ ಮಾಡಿದ. ಯಾವ ಉಪಯೋಗವಾಗಲಿಲ್ಲ.
ಇತ್ತ ನಾನು, ಬಸವ ಇಬ್ಬರು ಸೇರಿ ಟಿ.ಟಿ. ಗಾಗಿ ಗೊತ್ತಿದ್ದವರಿಗೆಲ್ಲ ಫೊನ್ ಮಾಡಿದೆವು. ಎಲ್ಲೂ ಟಿ.ಟಿ. ಸಿಗದಾಯಿತು.
ಕೊನೆಗೆ ಬೇರೆ ದಾರಿಯಿಲ್ಲದೆ, ಒಬ್ಬ ಟ್ರವೆಲ್ ಎಜೆನ್ಟಿಗೆ ಕರೆ ಮಾಡಿ ಎರೆಡು ಟಾಟಾ ಸುಮೊ ಕಳಿಸುವಂತೆ ಹೇಳಿದೆವು.
"ಆಯ್ತು ಸರ್" ಈಗಲೇ ಕಳಿಸಿಕೊಡುತ್ತೆನೆ ಎಂದ. ಇನೈದು ನಿಮಿಷದಲ್ಲಿ ನಿಮಗೆ ಡ್ರೈವರುಗಳ ಫೊನ್ ನಂಬರುಗಳನ್ನು ಕೊಡುತ್ತೆನೆ ಎಂದು ಹೇಳಿ ಫೊನ್ ಇಟ್ಟ.
ಐದು ನಿಮಿಷ ಅಲ್ಲ, ಅರ್ಧ ಘಂಟೆಯಾದರು ಆ ವ್ಯಕ್ತಿಯಿಂದ ಯಾವುದೇ ಫೊನ್ ಕರೆ ಬರಲೇ ಇಲ್ಲ. ನಾವು ಕರೆ ಮಾಡಿದರೆ "ನೀವು ತಲುಪಲು ಪ್ರಯತ್ನಿಸುತ್ತಿರುವ ಗ್ರಾಹಕ ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ.....". ಇತ್ತ ಇಂದ್ರನಿಗೆ ಪ್ರವಾಸಕ್ಕೆ ಕಾದುನಿಂತವರಿಂದ ಕರೆಗಳ ಮೇಲೆ ಕರೆಗಳು.
ಅಂತು ನಲವತ್ತು ನಿಮಿಷದ ಬಳಿಕ ಆ ವ್ಯಕ್ತಿಯ ಕರೆ ಬಂತು. ಡ್ರೈವರುಗಳ ಫೊನ್ ನಂಬರುಗಳನ್ನು ಕೊಟ್ಟ. "ಅವರಿಗೆ ಫೊನ್ ಮಾಡಿ, ಎಲ್ಲಿಗೆ ಬರಬೇಕು ಅಂತ ಹೇಳಿ ಸರ್" ಎಂದು ಹೇಳಿದ. ಆಗಲೇ ಸಮಯ ೧೧:೪೫ ಆಗಿತ್ತು.
ಡ್ರೈವರುಗಳಿಗೆ ಫೊನ್ ಮಾಡಿ ಎಲ್ಲೆಲ್ಲಿಗೆ ಬರಬೇಕು ಎಂದು ತಿಳಿಸಿದೆವು.
ವಿಚಿತ್ರ ಎಂದರೆ ಆ ಟಾಟಾ ಸುಮೊಗಳು ಬರುತ್ತಿದ್ದುದು ಕನಕಪುರದಿಂದ. ಒಂದು ಘಂಟೆಗೆ ನೀವು ತಿಳಿಸಿದ ಸ್ತಳದಲ್ಲಿ ಇರುತ್ತೆವೆ ಸರ್ ಎಂದರು.
ಕೊನೆಗೆ ಬೆಳಗಿನ ಜಾವ ೧:೩೦ಕ್ಕೆ ಗಾಡಿಗಳು ಬಂದವು.
ಅಂತು ನಮ್ಮ ಇಂದ್ರ ಟಾಟಾ ಸುಮೊ ಹತ್ತಿದ. ಅವನ ನಂತರ "ರೆಚಲ್" ಎನ್ನುವ ಹುಡುಗಿಯನ್ನು ಪಿಕ್-ಅಪ್ ಮಾಡಬೇಕಿತ್ತು. ಅವಳಿಗೆ ಕರೆ ಮಾಡಿದ. ಅವಳು ಕರೆ ಸ್ವೀಕರಿಸಲಿಲ್ಲ. ಇಂದ್ರ ಹಾಗು ಎಲ್ಲರೂ ಸೇರಿ ಎಸ್ಟು ಬಾರಿ ಕರೆ ಮಾಡಿದರು ಅವಳು ಕರೆಯನ್ನು ಸ್ವೀಕರಿಸಲಿಲ್ಲ. ಅವಳು ವಾಸವಿದ್ದ ಏರಿಯಾದ ಹೆಸರು ಗೊತ್ತಿತ್ತು ಆದರೆ ಮನೆ ಯಾವುದೆಂದು ಗೊತ್ತಿರಲಿಲ್ಲ. ಆ ಏರಿಯಾದಲ್ಲಿ ಒಂದೆರೆಡು ರೌಂಡ್ ಹೊಡೆದ. ಆ ಹೊತ್ತಿನಲ್ಲಿ ಧೈರ್ಯ ಮಾಡಿ, ಕೆಲವು ಮನೆಗಳ ಕದವನ್ನು ತಟ್ಟಿ ಕೇಳಿದ. ಪ್ರಯತ್ನಗಳು ಪಲಿಸಲಿಲ್ಲ. ಕೊನೆಗೆ ಬೇರೆ ದಾರಿಯಿಲ್ಲದೆ ಅವಳನ್ನು ಬಿಟ್ಟು ಅವಳ ಮುಂದಿನ ಪಿಕ್-ಅಪ್ ಗಳನ್ನು ಮಾಡಿದರು.
ಬೆಳಿಗ್ಗೆ ೩:೩೦ ಎಲ್ಲರನ್ನು (ರೆಚಲ್ ಬಿಟ್ಟು) ಪಿಕ್-ಅಪ್ ಮಾಡಿಕೊಂಡು ಬೆಂಗಳೂರು ಬಿಡಬೇಕೆನ್ನುವಾಗ ಒಂದು ಅಂತಾರಾಷ್ಟ್ರೀಯ ಕರೆ ಬಂತು. ಇದ್ಯಾರಪ್ಪ ಇಸ್ಟೊತ್ತಿನಲ್ಲಿ ಅಂತಾರಾಷ್ಟ್ರೀಯ ಕರೆ ಎಂದು ಫೊನ್ ಎತ್ತಿದ.
"ಇಂದ್ರ ಅವರೇ, ನಾನು ಥಾಮಸ್ ಅಂತ. ರೆಚಲ್ ಅವರ ಪತಿ. ನಾನು ಫಿನ್ಲ್ಯಾಂಡ್ನಲ್ಲಿ ಇದೀನಿ. ಅವಳು ಫೊನ್ ಸ್ವೀಕರಿಸುತ್ತಿಲ್ಲ. ನಿಮ್ಮೆಲ್ಲರ ಜೊತೆ ಟ್ರಿಪ್ ಹೋಗ್ತಿನಿ ಎಂದು ಹೇಳಿದ್ದಳು. ಅವಳಿಗೆ ಸ್ವಲ್ಪ ಫೊನ್ ಕೊಡುತ್ತೀರಾ ಪ್ಲಿಸ್..?" ಎಂದ.
ಇಂದ್ರ "ಅವಳೀಗ ನಮ್ಮ ಜೊತೆ ಇಲ್ಲ. ಅವಳಿಗೆ ಎಸ್ಟು ಬಾರಿ ಫೊನ್ ಮಾಡಿದರು ಅವಳು ಕರೆಯನ್ನು ಸ್ವೀಕರಿಸಲಿಲ್ಲ.".
"ಅವಳು ಯಾಕೊ ಫೊನ್ ಕೂಡ ಎತ್ತುತ್ತಿಲ್ಲ. ನನಗೆ ಭಯವಾಗುತ್ತಿದೆ. ನಾನು ನಿಮಗೆ ವಿಳಾಸವನ್ನು ಹೇಳುತ್ತೇನೆ. ದಯವಿಟ್ಟು ಹೋಗುತ್ತೀರಾ..." ಎಂದು ಥಾಮಸ್ ಕೇಳಿಕೊಂಡ.
ಥಾಮಸ್ ಫೊನಿನಲ್ಲಿ ದಾರಿಯನ್ನು ಹೇಳುತ್ತಿದ್ದ. ಅವನು ಹೇಳಿದ ಹಾಗೆ ಹೋಗಿ, ರೆಚಲ್ ಮನೆ ಮುಂದೆ ಹೋಗಿ ನಿಂತು, ಡೊರ್ ಬೆಲ್ ರಿಂಗ್ ಮಾಡಿದರು. ಬಾಗಿಲು ತೆಗೆಯಲಿಲ್ಲ.
ಹೀಗೆ ಒಂದೈದು ನಿಮಿಷ ಕದವನ್ನು ತಟ್ಟಿದರು....ಡೊರ್ ಬೆಲ್ ರಿಂಗ್ ಮಾಡಿದರು......
ಅವಳು ಬಾಗಿಲು ತೆಗೆಯಲಿಲ್ಲ....
ಎಲ್ಲರ ಎದೆ ಬಡಿತಾ ಜೊರಾಗಿ ಹೊಡೆದುಕೊಳ್ಳುತ್ತಿತ್ತು...
ಪುನಹ.... ಕದವನ್ನು ತಟ್ಟಿದರು....ಡೊರ್ ಬೆಲ್ ರಿಂಗ್ ಮಾಡಿದರು......
ಕೊನೆಗೆ...
ಒಳಗಡೆ ಕುಂಬಕರ್ಣ ನಿದ್ದೆ ಮಾಡುತ್ತಿದ್ದ ರೆಚಲ್ ಗೆ ಎಚ್ಚರವಾಯಿತು.
ಅವಳು ಬಂದು ಬಾಗಿಲು ತೆಗೆದಾಗ ಎಲ್ಲರ ಪಿತ್ತ ನೆತ್ತಿಗೇರಿತ್ತು.
"ಯಾಕೆ ಫೊನ್ ಎತ್ತಲಿಲ್ಲ...?" ಎಂದು ಸಿಟ್ಟಿನಲ್ಲಿ ಕೇಳಬೇಕು ಎನ್ನುವಸ್ಟರಲ್ಲಿ ಅವಳೇ "ಸಾರಿ.... ಸಾರಿ.... ಸಾರಿ... ಚರ್ಚ್ ಗೆ ಹೋದಾಗ ಫೊನ್ ಸೈಲೆನ್ಟ್ ಮೊಡ್ ನಲ್ಲಿ ಇಟ್ಟಿದ್ದೆ. ಚರ್ಚ್ ನಿಂದ ಹೊರಬಂದ ನಂತರ ಅದನ್ನು ತೆಗೆಯೋದನ್ನು ಮರೆತುಬಿಟ್ಟೆ..." ಎಂದಳು...
ಥಾಮಸ್ ಹಾಗು ಎಲ್ಲರು ಸಮಾಧಾನದಿಂದ ನಿಟ್ಟಿಸುರು ಬಿಟ್ಟರು. ಪ್ಲಾನ್ ಪ್ರಕಾರ ಪ್ರಯಾಣ ಮುಂದುವರೆಸಿದರು.
ಅಂತು ಎಲ್ಲರು (ರೆಚಲ್ ನ್ನು ಸೇರಿಸಿ) ಬೆಂಗಳೂರು ಬಿಟ್ಟಾಗ ಬೆಳಿಗ್ಗೆ ೫:೩೦ ಆಗಿತ್ತು......

ಲೇಖನ ಬಹಳ ಉದ್ದವಾಗಿದ್ದರಿಂದ ಆ ರಾತ್ರಿ ನಡೆದ ಬಹಳಷ್ಟು ವಿಷಯಗಳನ್ನು ಬಿಟ್ಟಿದ್ದೇನೆ. ಬಹುಶಃ "One Night @ the Call Center" ಪುಸ್ತಕದ ತರಹ ಒಂದು ಪುಸ್ತಕ ಬರೆಯವಹುದು ಅಸ್ಟು ದೊಡ್ಡದಾಗಿತ್ತು ಆ ರಾತ್ರಿ...
Share/Save/Bookmark

Wednesday, January 20, 2010

ಎಲ್ಲ ಮರೆತಿರುವಾಗ

ಈ ಘಟನೆ ಎರೆಡು ವರ್ಷದ ಹಿಂದೆ ನಡೆದಿದ್ದು.

ನನ್ನ ಮನೆಯ ಹತ್ತಿರದಲ್ಲೇ ಒಂದು ಸುಂದರವಾದ ಉದ್ಯಾನವನ ಇದೆ. ನಾನು ಜಾಗಿಂಗ್ ಮಾಡಲು ಅಪರೂಪಕ್ಕೊಮ್ಮೆ ಅಲ್ಲಿಗೆ ಹೋಗುತ್ತೇನೆ.
ಹೀಗೆ ಒಮ್ಮೆ ಜಾಗಿಂಗ್ ಮಾಡಲು ಉದ್ಯಾನವನದ ಒಳಗೆ ಹೋದೆ. ಅಲ್ಲಿ ಒಂದು ಧಾರಾವಾಹಿಯ ಶೂಟಿಂಗ್ ನಡೆಯುತ್ತಿತ್ತು.
ಈ ಉದ್ಯಾನವನದಲ್ಲಿ, ವಾರದಲ್ಲಿ ಒಂದು ಬಾರಿಯಾದರೂ ಯಾವುದಾದರೂ ಒಂದು ಧಾರಾವಾಹಿಯ ಶೂಟಿಂಗ್ ನಡೀತಾ ಇರುತ್ತದೆ.
ಅಲ್ಲಿ ನನಗೆ ಪರಿಚಯವಿದ್ದ ಒಬ್ಬ ಕಿರುತರೆ ಕಲಾವಿದ ಕಾಣಿಸಿದ.
ಆ ಕಲಾವಿದ ನನಗಿಂತ ನನ್ನ ತಮ್ಮನಿಗೆ ತುಂಬಾ ಪರಿಚಯ. ಒಂದೆರಡು ಬಾರಿ ಅವರು ನಮ್ಮ ಮನೆಗೂ ಬಂದಿದ್ದರು.
ನಾನು, ನನ್ನ ತಮ್ಮ ಹಾಗು ಅವರು ಸೇರಿ ಒಂದೆರೆಡು ಬಾರಿ ಹೋಟೆಲ್ನಲ್ಲಿ ಟೀ ಕೂಡ ಕುಡಿದಿದ್ದೆವು.

ಅವರು ಇನ್ನೊಬ್ಬ ಕಿರುತೆರೆ ಕಲಾವಿದನ ಜೊತೆ ಅಲ್ಲಿ ಮಾತನಾಡುತ್ತ ನಿಂತಿದ್ದರು. ನಾನು ಅವರನ್ನು ಮಾತನಾಡಿಸಲು ಹೋದೆ.
ಅವರ ಹತ್ತಿರ ಹೋಗಿ "ಹಲೋ ಸರ್, ಹೇಗಿದ್ದೀರಿ" ಎಂದೆ.
ಅವರು "ನಾನು ಚನ್ನಾಗಿದೀನಿ. ನೀವು ಹೇಗಿದೀರಿ..?" ಎಂದು ಆತ್ಮೀಯವಾಗಿ ಕೇಳಿದರು.
ನಾನು "ನಾನು ಚನ್ನಾಗಿದೀನಿ ಸರ್. ಮತ್ತೆ ಏನ್ ವಿಶೇಷ ಸರ್, ಬಹಳದಿನಗಳಿಂದ ನೀವು ನಮ್ಮ ಮನೆಯ ಕಡೆಗೆ ಬಂದೆ ಇಲ್ಲ." ಎಂದೆ.
ಅವರು "ಇಲ್ಲ ರೀ, ಸ್ವಲ್ಪ ಕೆಲಸ ಜಾಸ್ತಿ ಇರೋದ್ರಿಂದ ಬರೋದಕ್ಕೆ ಆಗಲಿಲ್ಲ." ಎಂದರು.
ಹೀಗೆ ಸ್ವಲ್ಪ ಹೊತ್ತು ಮಾತನಾಡಿಸಿದೆ. ನಾನ್ಯಾರು ಅಂತ ಅವರಿಗೆ ಗೊತ್ತಗಿಲ್ಲವೇನೋ ಎನ್ನುವ ಸಂಶಯ ಬಂತು.
ಅದಕ್ಕೆ ಅವರಿಗೆ ಕೇಳಿದೆ... "ನಾನ್ಯಾರು ಅಂತ ಗೊತ್ತಾಯ್ತ ಸರ್...?"
ಆಗ ಅವರು..."ಸಾರೀ ರೀ... ಗೊತ್ತಾಗ್ಲಿಲ್ಲ..." ಎಂದರು..
ನನಗೆ ನಗು ಬಂದು..."ನಾನು ಸರ್, ವೀರೇಶ್ ಅವರ ಅಣ್ಣ, ಶಿವಪ್ರಕಾಶ್" ಎಂದೆ.
ಆಗ ಅವರಿಗೆ ನಾನ್ಯಾರು ಎಂದು ಅರ್ಥವಾಗಿ "ಒಹ್... ಕ್ಷಮಿಸಿ ಶಿವು... ಮರೆತುಬಿಟ್ಟಿದ್ದೆ... ಹೇಗಿದಾನೆ ವೀರೇಶ್...?" ಎಂದು ಹೇಳಿ ನನ್ನ ತಮ್ಮ ಹಾಗು ನಮ್ಮ ಮನೆಯವರನ್ನು ವಿಚಾರಿಸಿದರು.
ಒಂದು ಸ್ವಲ್ಪ ಹೊತ್ತು ಹಾಗೆ ಮಾತನಾಡಿದ ನಂತರ ನಾನು "ಯಾವುದು ಸರ್ ಈ ಧಾರಾವಾಹಿ?" ಎಂದೆ.
ಆಗ ಅವರು "ಎಲ್ಲ ಮರೆತಿರುವಾಗ..." ಎಂದರು..
ಅವರ ಪಕ್ಕದಲ್ಲೇ ನಿಂತಿದ್ದ ಇನ್ನೊಬ್ಬ ಕಿರುತೆರೆ ಕಲಾವಿದ "ಅದಕ್ಕೆ ರೀ, ನಿಮ್ಮನ್ನೂ ಮರೆತುಬಿಟ್ಟಿದ್ದಾರೆ" ಎಂದು ಚಟಾಕಿ ಹಾರಿಸಿದರು.
Share/Save/Bookmark

Monday, January 4, 2010

ಬುದ್ದಿವಂತ



(ಚಿತ್ರ ಕೃಪೆ: ಅಂತರ್ಜಾಲ)

ಕೊನೆಯ ವರ್ಷದ ಡಿಪ್ಲೋಮಾ ಪರೀಕ್ಷೆ ಬರೆದು, ಫಲಿತಾಂಶಕ್ಕಾಗಿ ಕಾಯುತ್ತಿದ್ದೆ.
ಮೊದಲ ಎರಡು ವರ್ಷಗಳಲ್ಲಿ ಕಡಿಮೆ ಅಂಕಗಳನ್ನು ಪಡೆದು ಪಾಸಾಗಿದ್ದೆ. ಯಾಕೆ ಅಂತ ಕೇಳಬೇಡಿ. ಅದೊಂದು ದೊಡ್ಡ ಕಥೆ..!!!.
ಇದೇ ಕಾರಣಕ್ಕಾಗಿ ಓದುತ್ತಿದ್ದ ಆ ಕಾಲೇಜ್ ಬಿಟ್ಟು, ಬೇರೆ ಹೆಸರುವಾಸಿಯಾಗಿದ್ದ ಕಾಲೇಜ್ ಸೇರಿಕೊಂಡಿದ್ದೆ.
ಕೊನೆಯ ವರ್ಷದಲ್ಲಾದರೂ ಸ್ವಲ್ಪ ಉತ್ತಮ ಅಂಕಗಳಿಸಿ ಪಾಸಗೋಣವೆಂದು.
ಎಸ್ಟೆ ಕಷ್ಟವಾದರೂ ಸರಿ, ಈ ಕೊನೆಯ ವರ್ಷದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತಿರ್ಣನಾಗಬೇಕೆಂದು ಶ್ರಮ ಪಟ್ಟಿದ್ದೆ.

"ಫಲಿತಾಂಶ ನಾಳೆ ಬರುತ್ತದೆ..." ಎಂದು ಕೇಳಿದಾಗಿನಿಂದ, ನನ್ನ ಎದೆ ಒಂದೇ ಸಮನೆ ಬಡೆದುಕೊಳ್ಳುತ್ತಿತ್ತು. ಆ ರಾತ್ರಿ ಸರಿಯಾಗಿ ನಿದ್ದೆ ಕೂಡ ಮಾಡಲಿಲ್ಲ.
ಮರುದಿನ ಬೆಳಿಗ್ಗೆ ಬೇಗನೆ ಎದ್ದು ಬಳ್ಳಾರಿಗೆ ಬಂದೆ.
ಸೈಬರ್ ಸೆಂಟರ್ ಮುಂದೆ, ನನ್ನ ಹಾಗೆ ಬಹಳಷ್ಟು ಜನ ಜಮಾಯಿಸಿದ್ದರು.
ಸೈಬರ್ ಸೆಂಟರ್'ನವ ನನ್ನ ನಂಬರ್ ತೆಗೆದುಕೊಂಡು, ಫಲಿತಾಂಶ ಬರೆದುಕೊಳ್ಳುವಂತೆ ಹೇಳಿದ.
ಒಂದೊಂದು ವಿಷಯಗಳ ಅಂಕಗಳನ್ನು ಹೇಳುತ್ತಾ ಹೋದ.. ನಾನು ಬರೆದುಕೊಂಡೆ.
ಅಂತು ಎಲ್ಲಾ ವಿಷಯಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತಿರ್ಣನಾಗಿದ್ದೆ.
ನಾನು, ಎಲ್ಲಾ ಅಂಕಗಳನ್ನು ಸೇರಿಸಿ, ನನ್ನ ಶೇಕಡಾ ಅಂಕವನ್ನು ಲೆಕ್ಕಹಾಕಿದೆ.
ಶೇಕಡಾ 69% ಅಂಕ ಪಡೆದು ಉತ್ತಿರ್ಣನಾಗಿದ್ದೆ.
ಇದೇ ಮೊದಲಬಾರಿಗೆ ಜೀವನದಲ್ಲಿ ಇಷ್ಟು ಅಂಕ ಪಡೆದಿದ್ದು. :)
ತುಂಬಾ ಕುಶಿಯಲ್ಲಿದ್ದೆ. ಮನೆಗೆ ಬಂದು ಎಲ್ಲರಿಗೂ ಹೇಳಿ ಕುಶಿಯಿಂದ ಬೀಗಿದೆ.
ಮನೆಯಲ್ಲಿ ಎಲ್ಲರೂ ತುಂಬಾ ಸಂತೋಷಪಟ್ಟರು.

ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಶುಭ ಕೊರೋಣವೆಂದು ಯೋಚಿಸಿದೆ.
ಯಾರು ಹೆಚ್ಚು ಅಂಕ ಗಳಿಸಿದ್ದಾರೆ ಎಂದು ತಿಳಿಯಲು ಕಾಲೇಜಿನ ಲ್ಯಾಂಡ್'ಲೈನ್ ನಂಬರ್'ಗೆ ಫೋನಾಯಿಸಿದೆ.
ಫೋನ್ ರಿಂಗಾದ ಬಳಿಕ, ಆ ಕಡೆಯಿಂದ ಒಬ್ಬ ವ್ಯಕ್ತಿ ಫೋನ್ ಎತ್ತಿ "ಹಲೋ" ಎಂದರು.
ನನಗೆ ತುಂಬಾ ಪರಿಚಯವಿದ್ದವರ ಧ್ವನಿ ಅದು. ನಮ್ಮ ಕಂಪ್ಯೂಟರ್ ಸೈನ್ಸ್ ವಿಭಾಗದ HOD ಅಲೀಂ ಸರ್ ಅವರ ಧ್ವನಿ ಎಂದು ತಿಳಿಯಿತು.
ನಾನು "ಹಲೋ ಸರ್, ನನಗೆ ಒಂದು ಮಾಹಿತಿ ಬೇಕಾಗಿತ್ತು...."
ಅಲೀಂ ಸರ್ ... "ಏನು ಬೇಕಾಗಿತ್ತು....?"
ನಾನು "ಸರ್, ಈ ವರ್ಷ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಪಾಸಾದವರು ಯಾರು ಎಂದು ತಿಳಿದುಕೊಳ್ಳಬೇಕಾಗಿತ್ತು..."
ಅಲೀಂ ಸರ್... "ನೀವು ಯಾರು ಮಾತಾಡ್ತಾ ಇರೋದು....?".
ನಾನು.." ಸರ್, ನಾನು ಶಿವಪ್ರಕಾಶ್ "
ಅಲೀಂ ಸರ್..."Congratulations.... You are the topper in Computer Science...."
ನನಗೆ ಆಶ್ಚರ್ಯವಾಯ್ತು... ನಾನು "ಶಿವಪ್ರಕಾಶ್" ಎಂದು ಹೇಳಿದ್ದು ಅವರಿಗೆ "ಶಿವು" ಎಂದು ಕೇಳಿಸಿರಬೇಕು. ಯಾಕೆಂದರೆ ನಮ್ಮ ಕ್ಲಾಸ್ಸಿನಲ್ಲಿದ್ದುದು ಮೂವರು ಶಿವು'ಗಳು... ನಾನು ಅಸ್ಟೊಂದು ಬುದ್ದಿವಂತನೂ ಅಲ್ಲ.
ನಾನು ಸಣ್ಣ ಧ್ವನಿಯಲ್ಲಿ.."ಸರ್, ನಾನು ಶಿವಪ್ರಕಾಶ್" ಎಂದೆ..
ಅಲೀಂ ಸರ್... "ಹೌದು ನೀವೇ... ನಮ್ಮ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದು ಪಾಸಗಿರೋದು..."
ನನಗೆ ನಂಬಲು ಸಾಧ್ಯವಾಗಲಿಲ್ಲ.
ಮತ್ತೊಂದು ಪ್ರಶ್ನೆಹಾಕಿದೆ.. "ಸರ್, Second heighest ಯಾರದು?, ಎಷ್ಟು ಅಂಕ...?" ಎಂದು ಕೇಳಿದೆ.
ಅಲೀಂ ಸರ್.. "ಸಂತೋಷ್... 73.xx %"
ನನಗೆ ಆಶ್ಚರ್ಯವಾಯ್ತು. ನನಗೆ ಬಂದಿರೋದು 69%, ಸಂತೋಷ್'ಗೆ ಬಂದಿರೋದು 73.xx %... ಹಾಗಾದರೆ ಅವನೇ ಹೆಚ್ಚು ಅಂಕ ಗಳಿಸಿದವನು ಅಲ್ಲವೇ...?
ನನಗೆ ಅರ್ಥವಾಗಲಿಲ್ಲ.
ಕೊನೆಗೆ ತಡೆದುಕೊಳ್ಳಲಾಗದೆ ಕೇಳಿಬಿಟ್ಟೆ... "ಸರ್, ನನ್ನ ಶೇಕಡಾ ಅಂಕಗಳು ಎಷ್ಟು....?"
ಅಲೀಂ ಸರ್, ಸ್ವಲ್ಪವು ತಡ ಮಾಡದೆ ಹೇಳಿಬಿಟ್ಟರು "74%" ಎಂದು.
ಏನು ಮಾಡಬೇಕೆಂದು ತಿಳಿಯದೆ ಧನ್ಯವಾದಗಳನ್ನು ಹೇಳಿ, ಫೋನ್ ಇಟ್ಟೆ.
ಅದು ಹೇಗೆ ಸಾಧ್ಯ..?
ನನಗೆ ಬಂದಿರೋದು 69%, ಆದರೆ, ಸರ್ ಹೇಳ್ತಾ ಇದಾರೆ 74% ಅಂತ.
ಮತ್ತೊಮ್ಮೆ ನನ್ನ ಅಂಕಗಳ ಶೇಕಡಾವನ್ನು ಲೆಕ್ಕ ಹಾಕುತ್ತ ಕುಳಿತೆ.
ಬಹಳ ಹೊತ್ತು ಲೆಕ್ಕ ಹಾಕಿದ ಬಳಿಕ ತಿಳಿಯಿತು.... ನನಗೆ ಬಂದಿದ್ದು 69% ಅಲ್ಲ, 74% ಎಂದು.

ಅವತ್ತೇ ಗೊತ್ತಾಗಿದ್ದು, ನಾನು ಲೆಕ್ಕದಲ್ಲಿ ಎಷ್ಟು ಬುದ್ದಿವಂತನಿದ್ದೇನೆ ಎಂದು.
Share/Save/Bookmark