Wednesday, November 30, 2016

ಮೈಮರೆಯದಿರಿ...!!!

ಉಜ್ಜಿದ ನಂತರ...
ಒತ್ತುವ ಮುನ್ನ...
ಮೈಮರೆಯದೆ....
ಎಚ್ಚರವಾಗಿರಿ....!!!

ಒಮ್ಮೆ ಹೋದರೆ....
ಸರಿಪಡಿಸಿಕೊಳ್ಳುವುದು....
ತುಂಬಾ ಕಷ್ಟ...!!!


ಅಯ್ಯೋ... ಅಪಾರ್ಥ ಮಾಡಿಕೊಳ್ಳಬೇಡಿ...!!!

ನಾ ಹೇಳಿದ್ದು, ಕ್ರೆಡಿಟ್/ಡೆಬಿಟ್ ಕಾರ್ಡ್ ಉಜ್ಜಿದ ನಂತರ, PIN ಒತ್ತುವ ಮುನ್ನ, ಪಾವತಿಸಬೇಕಾಗಿರುವ ಮೊತ್ತವನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ... ಒಮ್ಮೆ ಹೋದರೆ ಸರಿಪಡಿಸಿಕೊಳ್ಳುವುದು ತುಂಬಾ ಕಷ್ಟ...!!!

ಜಾಗೊ ಗ್ರಾಹಕ್... ಜಾಗೊ..!!!

--
ಶಿವಪ್ರಕಾಶ್ ಎಚ್. ಎಮ್. 

Share/Save/Bookmark

Monday, November 7, 2016

ಅಂದು-ಇಂದು ೧

ಅಂದು:
ಯಾರು...
ಯಾರಿಗೆ...
ಯಾವಾಗ...
ಹೇಳಿದರು...?



ಇಂದು:
ಯಾರು...
ಯಾರಿಗೆ...
ಯಾವಾಗ...
ಹೇಳಿದರು...?
ಎನ್ನುವುದನ್ನು
ಹೇಗೆಲ್ಲಾ ತಿರುಚಿ ಹೇಳಬಹುದು...?


--
ಇಂದಿನ ಮಾಧ್ಯಮಕ್ಕೆ ಸುಳ್ಳನ್ನು ಸತ್ಯ ಮಾಡುವ, ಸತ್ಯವನ್ನು ಸುಳ್ಳುಮಾಡುವ ಶಕ್ತಿ ಇದೆ. ಜನರೂ ಕೂಡ ಯಾವುದೇ ಸುದ್ದಿಯನ್ನು ಒಮ್ಮೆ ಪರಾಮರ್ಶಿಸದೆ ನಂಬಿಬಿಡುತ್ತಿದ್ದಾರೆ. ಯಾರಿಗೂ ಸತ್ಯ ಬೇಕಿರುವಂತೆ ಕಾಣುತ್ತಿಲ್ಲ. ಸುಂದರ ಸುಳ್ಳನ್ನು ನಂಬುತ್ತಾ, ತಮ್ಮ ನಂಬಿಕೆಗಳಲ್ಲೇ ಬಂಧಿಯಾಗುತ್ತಿದ್ದಾರೆ. 
--

ಶಿವಪ್ರಕಾಶ್ 

Share/Save/Bookmark

Thursday, November 3, 2016

ಅಂಬಿಗನಿರದ ಈ ದೋಣಿಗೆ..



ಮನುಜ..
ಸರಿಯಾಗಿ ನೋಡು...
ಹಣವಿಲ್ಲದೆ ನಿನಗೆ ಸಿಕ್ಕಿಹ...
ಬೆಲೆಕಟ್ಟಲಾಗದ ಅತ್ಯಮೂಲ್ಯ ಕೊಡುಗೆ ಇಲ್ಲಿದೆ...

ಇಲ್ಲಿ...
ಗಾಳಿಯಿದೆ...
ನೀರಿದೆ...
ಹಾಗು ಬೆಳಕಿದೆ...

ಬೆಳಕಿಲ್ಲದೆ ಬದುಕಿಲ್ಲ...
ಗಾಳಿಯಿಲ್ಲದೆ ಉಸಿರಿಲ್ಲ...
ನೀರಿಲ್ಲದೆ ನೀನೇ ಇಲ್ಲ..

ಉಚಿತವಾಗಿ ಸಿಕ್ಕಿದೆಯೆಂದು...
ಹಾಳು ಮಾಡಬೇಡ...
ಕಾಲಮೀರಿದೊಡೆ... ಪರಿತಪಿಸಿದರೂ...
ನಿನಗೆ ಕ್ಷಮೆಯಿಲ್ಲ...

ಅಂಬಿಗನಿರದ ಈ ದೋಣಿಗೆ,
ನೀನೆ ಅಂಬಿಗ...
ಇಲ್ಲಿ ಕಿಚ್ಚಿದೆ... ನೀರೂ ಇದೆ...
ಕಿಚ್ಚು ಹಚ್ಚಿದ್ದು ನೀನು...
ಆರಿಸಬೇಕಾಗಿರುವುದು ನೀನೇ...!!!

ಎಚ್ಚೆತ್ತುಕೊ...
ಈಗಾಗಲೇ ಬಹಳ ತಡವಾಗಿದೆ...
ಬಹಳ ತೆರಿಗೆ ಕಟ್ಟಿ ಕೊಳ್ಳುವ ದಿನ ಬಲುದೂರವಿಲ್ಲ...
ಆ ದುರಂತಕ್ಕಾಗಿ ಕಾಯಬೇಡ...

ನೀರಿನಾಳ ಅರಿಯದ...
ಈ ಕಾಗದದ ದೋಣಿಗೆ,
ಬುದ್ಧಿಯಂಬ ಕಿಚ್ಚು ಹಚ್ಚಿ....
ಕಾಪಾಡು...

ಬಳಸು...
ಬೆಳಸು...
ನಾಳಿನವರಿಗೂ ಕಾಪಾಡು...
ನಾ ಸುಟ್ಟು ಬೂದಿಯಾಗುವ ಮೊದಲು....

ಇಂತಿ ನಿನ್ನ ಹಡೆದವ್ವ,
ಪ್ರಕೃತಿ ಮಾತೆ...

---
ಶಿವಪ್ರಕಾಶ್ ಎಚ್ ಎಮ್


ಅವಧಿಯ ಕ್ಲಿಕ್ ಆಯ್ತು ಕವಿತೆಗೆ ಬರೆದ ಕವಿತೆ..
ಅವಧಿಯಲ್ಲಿ ಪ್ರಕಟವಾದ ಕೊಂಡಿ: ಅಂಬಿಗನಿರದ ಈ ದೋಣಿಗೆ..

Share/Save/Bookmark

ಕ್ಲಿಕ್ಕು ಕ್ಲಿಕ್ಕಿಸುತಿದ್ದುದರ ಕವಿತೆ


ಕ್ಲಿಕ್ ಆಯ್ತು ಕವಿತೆ
ಕ್ಲಿಕ್ಕು ಕ್ಲಿಕ್ಕಿಸುತಿದ್ದುದರ ಕವಿತೆ.....

ಭೂತಕಾಲಕೆ ನಿನಪಾದೆ...
ನಿನಪು ನೆನಪಿಸುತ ವರ್ತಮಾನವಾದೆ..
ಭವಿಷತ್ ಎಚ್ಚರಿಸುವ ಇತಿಹಾಸವಾದೆ....

ಕಪ್ಪು ಬಿಳುಪಾದೆ...
ಬಣ್ಣ ಬಣ್ಣದ ಚಿತ್ರವಾದೆ....
ನೆರಳು ಬೆಳಕಿನ ಆಟವಾದೆ....

ಪಡೆದುಕೊಂಡಿರುವುದರ
ಹಾಗು
ಕಳೆದುಕೊಂಡಿರುವುದರ
ನಡುವೆ
ಕನ್ನಡಿಯಾದೆ....

ಕೊಬ್ಬಿದ ಕಬ್ಬಿಣದ ದೇಹ ನನದು,
ನಾಜೂಕಾದ ಟಚ್ ಸ್ಕ್ರೀನ್ ಬೆಡಗಿ ಬಂದೊಡನೆ,
ಮೂಲೆಗುಂಪಾದೆ... ತುಕ್ಕುಹಿಡಿದೆ... ಸಮಾಧಿಯಾದೆ...

ನಿನ್ನ ನಿನಪುಗಳಿಗೆ...
ಹಸಿರು ಊಸಿರಾಗಿಸಿರುವೆ...
ಅಷ್ಟು ಸಾಕು ನನಗೆ...
ಇನ್ನು ನಿಶ್ಚಿಂತೆಯಿಂದ
ಚಿರನಿದ್ರೆಗೆ ಜಾರುವೆ...

ಕ್ಲಿಕ್ ಆಯ್ತು ಕವಿತೆ
ಕ್ಲಿಕ್ಕು ಕ್ಲಿಕ್ಕಿಸುತಿದ್ದುದರ ಕವಿತೆ.....


ಪ್ರೀತಿಯಿಂದ,
ಶಿವಪ್ರಕಾಶ್ ಎಚ್. ಎಮ್.

ಅವಧಿಯ ಕ್ಲಿಕ್ ಆಯ್ತು ಕವಿತೆಗೆ ಬರೆದ ಕವಿತೆ..  

Share/Save/Bookmark